Monday, December 22, 2008

ಅವಧಿಯಲ್ಲಿ ಚಂದ್ರಯಾನ

ಅವಧಿ ಬ್ಲಾಗ್ನಲ್ಲಿ ನಮ್ಮ ಚಂದ್ರಯಾನ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. 'TV9 ನ ದೆಹಲಿ ವರದಿಗಾರ ಶಿವಪ್ರಸಾದ್ ತಮ್ಮ ‘ಅಲೆಯುವ ಮನ’ ಬ್ಲಾಗ್ ನಿಂದ ಪರಿಚಿತರು. ‘ಶಾಂತವಾಗು ಮನವೆ, ತಲ್ಲಣಿಸಬೇಡ’ ಎನ್ನುವ ಘೋಷ ವಾಕ್ಯ ಇವರ ಬ್ಲಾಗ್ ನದ್ದು. ಪತ್ರಿಕೋದ್ಯಮದ ನಿರಂತರ ಸವಾಲುಗಳಿಗೆ ತೆರೆದುಕೊಳ್ಳುವ ಪತ್ರಕರ್ತರಿಗೆ ಹೇಳಿಮಾಡಿಸಿದ ವಾಕ್ಯ. ತಮ್ಮ ಕೆಲಸದ ಮಧ್ಯೆಯೂ ಶಿವಪ್ರಸಾದ್ ‘ಚಂದ್ರಯಾನ’ ಪುಸ್ತಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ'ಎಂದು ಬರೆದು ನಮ್ಮ ಬೆನ್ನು ತಟ್ಟಿದ್ದಾರೆ. ಅವರ ವಿಶ್ವಾಸ ದೊಡ್ಡದು.
ಅವಧಿ ಬ್ಲಾಗ್ ಗೆ ಭೇಟಿ ನೀಡಲು ಇಲ್ಲಿ http://www.avadhi.wordpress.com/ ಕ್ಲಿಕ್ ಮಾಡಬಹುದು.

No comments: