Monday, December 29, 2008

'ಚಂದ' ಯಾನದ ಬಗ್ಗೆ ಚೆಂದದ ಪುಸ್ತಕ

ಚಿಂತನಗಂಗಾ ಪ್ರಕಾಶನದ ಚಂದ್ರಯಾನ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆ, ಮೆಚ್ಚುಗೆ ಕೇಳಿ ಬರುತ್ತಿದೆ. ಅನೇಕ ಮಿತ್ರರು ತಮ್ಮ ಬ್ಲಾಗ್ ಗಳಲ್ಲಿ ಪುಸ್ತಕದ ಬಗ್ಗೆ ಬರೆಯುತ್ತಿದ್ದಾರೆ. ಬಾಗಲಕೋಟೆಯ ವಿ.ಕ.ಮಿತ್ರ ರವಿರಾಜ ಗಲಗಲಿ ತಮ್ಮ http://ravirajgalagali.blogspot.com/ ಬ್ಲಾಗ್ ನಲ್ಲಿ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.
'ಸ್ನೇಹಿತ, ಪತ್ರಕರ್ತ ಶಿವಪ್ರಸಾದ್ ಹೊಸ ಪುಸ್ತಕ ಬರೆದಿದ್ದಾನೆ ಹೆಸರು ಚಂದ್ರಯಾನ. ಚಂದಮಾಮನ ಬಯಸುವ ಮಗುವಿನ ಕನವರಿಕೆ, ಚಂದ್ರನೆಂಬ ಗ್ರಹದ ಬಗ್ಗೆ ವಿಜ್ಞಾನಿಯ ಕುತೂಹಲ, ಚಂದ್ರನಲ್ಲಿ ಪ್ರಿಯತಮೆ ಕಾಣುವ ಪ್ರಿಯಕರನ ಪ್ರೀತಿ, ಆಕಾಶದಲ್ಲೊಮ್ಮೆ ದಿಟ್ಟಿಸಿ ಚಂದ್ರನ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ವೃದ್ಧರ ಬಯಕೆ ಎಲ್ಲವೂ ಇಲ್ಲಿ ದಾಖಲಾಗಿದೆ.
ಚಂದ್ರನ ಬಗ್ಗೆ ಬರೆಯಬಹುದಾದ ಎಲ್ಲವನ್ನೂ ಇಲ್ಲಿ ಅಕ್ಷರ ರೂಪದಲ್ಲಿ ಕಾಣಿಸಲಾಗಿದೆ. ಹೊಸದಿಲ್ಲಿಯಲ್ಲಿ ಟಿವಿ೯ ವರದಿಗಾರನಾಗಿರುವ ಶಿವಾ ಬಿಡುವು ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಂಡಿದ್ದಾನೆ ಎಂಬುದಕ್ಕೆ ಈ ಪುಸ್ತಕ ಸಾಕ್ಷಿ. ಅಂದ ಹಾಗೆ ಪುಸ್ತಕ ಸದ್ಯ ಮಾರುಕಟ್ಟೆಯಲ್ಲಿದೆ. ಎಲ್ಲ ಮಳಿಗೆಗಳಲ್ಲೂ ಲಭ್ಯ. ನೀವೂ ಕೊಂಡು ಓದಿ, ಸಂತಸಪಡಬಹುದು ಎಂದು ಬರೆದಿದ್ದಾರೆ.
ಥ್ಯಾಂಕ್ಸ್.

No comments: