Sunday, December 21, 2008

ಚಂದ್ರಯಾನ


ಚಂದ್ರಯಾನ ಇಡೀ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಈ ಯೋಜನೆ ನಮ್ಮ ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಯುವ ಮನಸ್ಸುಗಳಿಗೆ ಹೊಸ ಟಾನಿಕ್ ನೀಡಿದೆ. ಈ ಬಗ್ಗೆ ಚಿಂತನಗಂಗಾ ಪ್ರಕಾಶನ 'ಚಂದ್ರಯಾನ' ಎಂಬ ಪುಸ್ತಕ ಪ್ರಕಟಿಸುತ್ತಿದೆ. ಪುಸ್ತಕವನ್ನು ಟಿವಿ9 ದೆಹಲಿ ಮುಖ್ಯಸ್ಥರಾದ ಶಿವಪ್ರಸಾದ ಟಿ.ಆರ್. ಬರೆದುಕೊಟ್ಟಿದ್ದಾರೆ. ಇದಕ್ಕೆ ಇಸ್ರೊದ ಇಸ್ಟ್ರಾಕ್ ನಿದೇ೵ಶಕರಾದ ಎಸ್.ಕೆ.ಶಿವಕುಮಾರ್ ಅವರ ಮುನ್ನುಡಿಯಿದೆ. ಇದರಲ್ಲಿ ದೆಹಲಿಯ ವಿಜಯ ಕನಾ೵ಟಕ ಮಿತ್ರ ವಿನಾಯಕ ಭಟ್ ಮೂರೂರು, ಮೈಸೂರು ವಿ.ಕ.ಮಿತ್ರ ರಾಜೀವ್, ಬೆಂಗಳೂರು ವಿ.ಕ.ಸಹೋದರಿ ರಜನಿ, ಧಾರವಾಡದ ಪತ್ರಕರ್ತ ಮಿತ್ರ ವಿಭವ್ ಹಾಗೂ ದೆಹಲಿಯ ಕನಾ೵ಟಕ ವಾತಾ೵ಧಿಕಾರಿ ವೀರಣ್ಣ ಕಮ್ಮಾರ್ ಅವರೂ ಸಹ ಒಂದೊಂದು ಲೇಖನ ಬರೆದಿದ್ದಾರೆ. ಇನ್ನೊಂದು ವಾರದಲ್ಲಿ ಪುಸ್ತಕ ಹೊರ ಬರಲಿದೆ. ಪುಸ್ತಕವನ್ನು ನಮ್ಮ ಪ್ರೀತಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಅಪಿ೵ಸಿದ್ದೇವೆ. ಅವರೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಲೇಖಕ ಮಿತ್ರರ ಆಸೆ. ಅವರು ದಿನಾಂಕ ನೀಡುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲಿ ನಿಮಗೂ ದಿನಾಂಕ ತಿಳಿಸುತ್ತೇವೆ. ಅಂದಹಾಗೆ, ಪುಸ್ತಕದ ಮುಖಪುಟವನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ. ನಿಮ್ಮ ಪ್ರತಿಕ್ರಿಯೆ ತಿಳಿಸಿ.


ನಿಮ್ಮ ಗಮನಕ್ಕೆ: ಸೋಮವಾರ ನಿಮಗಾಗಿ ‘ಇಸ್ರೋ ವಿಜ್ಞಾನಿಗಳು 1960ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು’ ಎಂಬ ವಿವರ ತಿಳಿಸುವ ಪುಸ್ತಕದ ಒಂದು ಚಾಪ್ಟರ್ ಇಲ್ಲಿ ಪ್ರಕಟವಾಗಲಿದೆ.

No comments: